ಮಾಗಿದ ಕನಸುಗಳು

ನನ್ನ ಬಾಗಿ ಕಾಮನಬಿಲಾದ ಬೆನ್ನು
ಗುಳಿಬಿದ್ದ ಕಣ್ಣು ಸುಕ್ಕುಗಟ್ಟಿ
ಗೆರೆಮೂಡಿ ಮಾಗಿದ ಮುಖ
ನಡುಗುತ್ತಿರುವ ಕೈಗಳಲ್ಲಿ
ನನ್ನ ಕನಸಿನ ವಸಂತಗಳನ್ನು
ಭದ್ರವಾಗಿ ಹಿಡಿದಿಡಲು
ನಿರಂತರ ತವಕಿಸುತ್ತೇನೆ.

ನನ್ನವನ ಪ್ರೀತಿ ತುಂಬಿದ ಪತ್ರಗಳನ್ನು
ಹಳೆಯ ಪೆಟ್ಟಿಗೆಯಿಂದ ಹೊರತೆಗೆದು
ಪ್ರೀತಿಯಿಂದ ನಡುಗುವ ಕೈ ಸವರಿ
ಆತ್ಮೀಯವಾಗಿ ಓದಿದಾಗ ಹಸಿರಾಗುತ್ತೇನೆ.
ಎಪ್ಪತ್ತರ ಅಂಚಿನಲ್ಲಿಯೂ ನಾನು
ಇಪ್ಪತ್ತರ ಹರೆಯ ಅನುಭವಿಸುತ್ತೇನೆ.

ದಿನಗಳು ಉರುಳಿ – ನೆರಳು ಬೆಳಕಿನಾಟ
ಕಾಲದ ಭೂತದಲ್ಲಿ ಹುಗಿದ ನೆನಪುಗಳು
ನೆನಪಿನಾಳದಲಿ ಹೂತ ಅಮರ ಪತ್ರಗಳು
ನನ್ನ ಕಣ್ಣು ರೆಪ್ಪೆಯಲ್ಲಿ ಬಚ್ಚಿಟ್ಟ
ಅಸಂಖ್ಯ ಅರ್ಥಗಳು – ಕಥೆಗಳು

ಮುಚ್ಚಿದ ನನ್ನ ಕಣ್ಣುಗಳಿಂದ
ಘಮ್ಮೆಂದು ಹೊರಸೂಸುವ
ಆತ್ಮದ ಅನುಭವದ ಸುಗಂಧ ಪರಿಮಳ
ಪಕ್ಕೆಗೂಡುಗಳ ಮೇಲೆ ತೇಲುವ
ಎಲುಬಿನ ಬರೀ ಹಂದರದಲಿ
ಕನಸಿನ ನಕ್ಷತ್ರಗಳ ಲೋಕವಿದೆ
ಭವಿಷ್ಯತ್ತಿನಲಿ ಹೊಸ ನಿರ್ಮಾಣ
ಕಾಣಲು ತವಕಿಸುವ ಹಂಬಲವಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕ ನೀ ನೋಡಬೇಕೆ
Next post ಗೀತಾಚಾರ್‍ಯ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys